ದಿನಾಂಕ : 28-08-2022ರ ಭಾನುವಾರದಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು
ಶ್ರೀಶ್ರೀಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು, ಶಾಖಾಮಠ, ಹೊಸದುರ್ಗ ದಿವ್ಯ ಸಾನಿಧ್ಯದಲ್ಲಿ
ಹಾಲುಮತ ಮಹಾಸಭಾ ವತಿಯಿಂದ ಹಾಲುಮತ ಜನ ಜಾಗೃತಿ ಸಭೆಯನ್ನು ಹಮ್ಮಿಕೊಂಡಿದ್ದು,
ಸಮುದಾಯದ 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಮತ್ತು
ಶಿವಮೊಗ್ಗ ಜಿಲ್ಲೆಯ ಶ್ರೀ ಮೈಲಾರಪ್ಪ, ಅಧ್ಯಕ್ಷರು, ಜಿಲ್ಲಾ ಕುರುಬರ ಸಂಘ, ಶಿವಮೊಗ್ಗ ಇವರಿಗೆ
“ಹಾಲುಮತ ಚೇತನ” ಪ್ರಶಸ್ತಿ ಪುರಸ್ಕಾರ
ಈ ಕಾರ್ಯಕ್ರಮಕ್ಕೆ ಸಮುದಾಯದ ಜನಪ್ರತಿನಿಧಿಗಳು, ಜಿಲ್ಲಾ ನಾಯಕರುಗಳು ಆಗಮಿಸಲಿದ್ದಾರೆ.
ಸಮುದಾಯದ ಕುಲ ಭಾಂದವರು, ಮಹಿಳೆಯರು, ಶಿವಮೊಗ್ಗ ಜಿಲ್ಲೆಯ ಸಮಾಜದ ಸಂಘಟನೆಯ ಪ್ರತಿನಿಧಿಗಳು,
ಯುವಕ-ಯುವತಿಯರು, ವಿದ್ಯಾರ್ಥಿಗಳು, ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನ ಸಹಾಯದೊಂದಿಗೆ
ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಹಾಲುಮತ ಮಹಾಸಭಾದ ಡಾ. ಪ್ರಶಾಂತ್ ರಾಜ್ಯ ಉಪಾಧ್ಯಕ್ಷರು ಮೊ.: 9845553091
ಸಿ ದಾನೇಶ್ ಜಿಲ್ಲಾ ಅಧ್ಯಕ್ಷರು ಮೊ.: 9448208030, ಗಣೇಶ್ ಬಿಳಿಗಿ ಕಾರ್ಯಾಧ್ಯಕ್ಷರು ಮೊ.: 9986404127
ಸುಹಾಸ್ಬಾಬು ಕಾರ್ಯದರ್ಶಿ ಮೊ.: 8088045708 ಪದಾಧಿಕಾರಿಗಳು ಮತ್ತು ಸದಸ್ಯರು ತಿಳಿಸಿರುತ್ತಾರೆ.
ದಿನಾಂಕ : 28-08-2022, ಭಾನುವಾರ, ಬೆಳಿಗ್ಗೆ : 10-00 ಗಂಟೆಗೆ
ಸ್ಥಳ : ಸರ್ಕಾರಿ ನೌಕರರ ಭವನ, ಆರ್.ಟಿ.ಓ. ರಸ್ತೆ, ಶಿವಮೊಗ್ಗ